Treasurer Message 

ಭುವನ ಜ್ಯೋತಿ (ರಿ) ಎಜುಕೇಷನ್ ಟ್ರಸ್ಟ್ ನ ವತಿಯಿಂದ ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ  ಕಾನೂನು ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಭುವನ ಜ್ಯೋತಿ ಕಾನೂನು ಅಧ್ಯಯನ ಸಂಸ್ಥೆಯನ್ನು 2024 ರಲ್ಲಿ ಸ್ಥಾಪನೆ ಮಾಡಲಾಯಿತು . ಈ ಸಂಸ್ಥೆಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಶಿರ್ತಾಡಿ  ಗ್ರಾಮದಲ್ಲಿ ನೆಲೆಸಿದ್ದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 13ರ ಮೂಡಬಿದ್ರೆಯಿಂದ ನಾರಾವಿ ಮಾರ್ಗದಲ್ಲಿ 10 ಕಿ.ಮೀ ಅಂತರದಲ್ಲಿ ಹಾಗೂ ಕಾರ್ಕಳದಿಂದ ಸುಮಾರು 25 ಕಿಲೋ ಮೀಟರ್ ಅಂತರದಲ್ಲಿ ನೆಲೆಸಿರುತ್ತದೆ. ಹೊರನಾಡು, ಶೃಂಗೇರಿ, ಮಲೆನಾಡು ಹಾಗೂ ತುಳುನಾಡು ಪ್ರದೇಶದ ವಿದ್ಯಾರ್ಥಿಗಳ ಕಾನೂನು ವಿದ್ಯಾಭ್ಯಾಸದ ಕನಸಿಗೆ ಜೀವತುಂಬುವ ನಿಟ್ಟಿನಲ್ಲಿ ಐದು ಪರಿಣಿತ ಶಾಲಾ ಶಿಕ್ಷಕರು ಈ ಸಂಸ್ಥೆಯನ್ನು ಸ್ಥಾಪಿಸಿರುತ್ತಾರೆ. ಕಾನೂನು ಕ್ಷೇತ್ರಕ್ಕೆ ಬದ್ಧ ವೃತ್ತಿಪರ  ಸಮೂಹವನ್ನು ತಯಾರು ಮಾಡುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಮೌಲ್ಯಾಧಾರಿತ ಕಾನೂನು ಶಿಕ್ಷಣವನ್ನು ಪ್ರೋತ್ಸಾಹಿಸುವುದು ಸಂಸ್ಥೆಯ ಧ್ಯೇಯವಾಗಿದ್ದು ಕಲಿಕೆಗೆ  ಪೂರಕವಾದಂತಹ ಸುಸಜ್ಜಿತ ವ್ಯವಸ್ಥೆಯನ್ನು, ಹಚ್ಚ ಹಸಿರಿನ ನಿಸರ್ಗದ ಮಡಿಲಲ್ಲಿ ವಿದ್ಯಾರ್ಥಿಗಳಿಗಾಗಿ ಕಲ್ಪಿಸಿಕೊಡಲಾಗಿದೆ.

ವಿಶಾಲವಾದ  ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಕಾನೂನು ಕ್ಷೇತ್ರಕ್ಕೆ ಬೇಕಾದಂತಹ ಪ್ರಾಯೋಗಿಕ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲು ಅಣುಕು  ನ್ಯಾಯಾಲಯ ಕೊಠಡಿ, ಇಂಟರ್ನ್ಶಿಪ್ ವ್ಯವಸ್ಥೆ, ವಕೀಲರೊಂದಿಗೆ ಸಂವಾದ, ನ್ಯಾಯಾಲಯ ಭೇಟಿ ಇತ್ಯಾದಿಯನ್ನು ನಡೆಸುತ್ತಿದ್ದೇವೆ. ಕಾನೂನು ನೆರವು, ಸಂವಾದ ಮತ್ತು ಕಾನೂನು ಪ್ರಕರಣದ ಅಧ್ಯಯನ ಗಳಿಗೆ ಒತ್ತು ಕೊಡಲಾಗುತ್ತದೆ. ವಿದ್ಯಾರ್ಥಿಗಳನ್ನು  ಕಾರ್ಪೊರೇಟ್ ಕಾನೂನು, ನ್ಯಾಯಾಂಗ ತನಿಖೆ, ಕಾನೂನು ಸಲಹೆ, ಶೈಕ್ಷಣಿಕ ಮತ್ತು ಸಾರ್ವಜನಿಕ ಸೇವೆ ಸೇರಿದಂತೆ ವೈವಿಧ್ಯಮಯ ವೃತ್ತಿ ಅವಕಾಶಗಳಿಗೆ ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆ, ನೃತ್ಯ, ಸಂಗೀತ, ಕರಾವಳಿಯ ಗಂಡು ಕಲೆ ಯಕ್ಷಗಾನದ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಸಂಸ್ಥೆಯು ನೀಡುತ್ತದೆ. ವಿದ್ಯಾರ್ಥಿ ಜೀವನದ ಯಶಸ್ಸಿಗಾಗಿ ಅವರ ಆರೋಗ್ಯ, ವ್ಯಕ್ತಿತ್ವ ವಿಕಸನ, ಮೌಲ್ಯ  ಮತ್ತು  ಸೇವಾ ಮನೋಭಾವವನ್ನು ತುಂಬುವ ಸಕ್ರಿಯ ಪ್ರಯತ್ನದಲ್ಲಿ ನಮ್ಮ ಅಧ್ಯಾಪಕ ವೃಂದ ಸಕ್ರಿಯವಾಗಿ ತೊಡಗಿಕೊಂಡಿದೆ. ಈ ಸದಾವಕಾಶವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ತಮ್ಮ ವೃತ್ತಿ ಜೀವನದ ಭದ್ರಬುನಾದಿಯನ್ನು ರೂಪಿಸಿಕೊಳ್ಳುವುದಾಗಿ ತಮ್ಮೆಲ್ಲರಲ್ಲಿ ನನ್ನ ನಮ್ರ ವಿನಂತಿ ತಮಗೆಲ್ಲರಿಗೂ ಶುಭವಾಗಲಿ.

ಶ್ರೀಮತಿ. ಲತಾ ಎ ಕೋಶಾಧಿಕಾರಿ ಭುವನ ಜ್ಯೋತಿ ಎಜುಕೇಷನ್ ಟ್ರಸ್ಟ್

Tell us a little about yourself and we’ll help with the rest. Our convenient online application tool only takes 10 minutes to complete.

After you submit your application, an admissions representative will contact you and will help you to complete the process.

Once you’ve completed your application and connected with an admissions representative, you’re ready to create your schedule.

FORM

Are you ready to take the next step toward your future career?